ನನ್ನ ನಿರೀಕ್ಷೆಯಲ್ಲಿ
Thursday, September 7, 2017
ಬೇಲಿ
ಬೇಲಿಯಾರಿ ಮೇಯುವಾಸೆ
ಬೇಲಿಯೇ ಇಲ್ಲದಿರುವಾಗ...
ಕಟ್ಟುಪಾಡುಗಳ
ಬೇಲಿಯ ಕಿತ್ತೆಸೆದಿಹೆ,
ಸುತ್ತಲೂ ಬಟಾಬಯಲು.
ಗುರು ಅಲ್ಲಮನೇನಾದರೂ
ಬರಬಹುದೆಂದು
ಕಾಯುತಿರುವೆ!
ಈ ಬಯಲದಾರಿಯಲಿ
ಬದುಕುವುದಕ್ಕೊಂದು ಕಾರಣ
ಒಮ್ಮೊಮ್ಮೆ...
ಕೆಲವು ಕಾರಣಗಳಿಂದಈ ಬದುಕು ಯಾಕೆ?
ಅಂತನಿಸಿಬಿಡುತ್ತೆ. ಆದರೆ
ಹಲವು ಕಾರಣಗಳಿವೆಯೆಂದು
ಬದುಕಿದ್ದೇನೆ. ಆ ಹಲವು
ಕಾರಣಗಳಲ್ಲಿ, ನೀನು
ಪ್ರಮುಖ ಕಾರಣ!
ಅಭಿಯಂತರೆ
ನೀ ನನ್ನ
ಕನಸುಗಳ
ಅಭಿಯಂತರೆ*
ನಾ ಬಳಿ ಬಂದರೆ
ನೀನಾಗುವೆ
ಅಭ್ಯಂತರೆ.
ಬಯಸುವೆ
ನೀನಾಗಲಿಯೆಂದು
ನನ್ನ ಬದುಕಿಗೆ
ಅಭಯಂತರೆ!
*ಅಭಿಯಂತರ-Engineer
ಕನಸುಗಳ
ಅಭಿಯಂತರೆ*
ನಾ ಬಳಿ ಬಂದರೆ
ನೀನಾಗುವೆ
ಅಭ್ಯಂತರೆ.
ಬಯಸುವೆ
ನೀನಾಗಲಿಯೆಂದು
ನನ್ನ ಬದುಕಿಗೆ
ಅಭಯಂತರೆ!
*ಅಭಿಯಂತರ-Engineer
ನಿನ್ನೊಡನಾಡಿದ ಮಾತುಗಳು
ನಿನ್ನೊಡನಾಡಿದ ಮಾತುಗಳು:
ಅರ್ಧ ಹಾಡಿ ನಿಲ್ಲಿಸಿದ
ಮಧುರ ಗೀತೆ.
ಅರ್ಧ ಹಾಡಿ ನಿಲ್ಲಿಸಿದ
ಮಧುರ ಗೀತೆ.
ಆಡಿದುದಕೆ ಮನ ಕುಣಿದು
ಕುಪ್ಪಳಿಸುವುದು,
ಹಾಗೆಯೇ ಉಳಿದ ಮಾತುಗಳಿಗೆ
ಕಾತರಿಸುವುದು!
ಕುಪ್ಪಳಿಸುವುದು,
ಹಾಗೆಯೇ ಉಳಿದ ಮಾತುಗಳಿಗೆ
ಕಾತರಿಸುವುದು!
Subscribe to:
Comments (Atom)






